Wednesday, May 8, 2024

ಮನದಾಳದ ಕಥನ



ಕಥೆಗಳಿಗೇನಿವೆ ಕೊರತೆಯಿಲ್ಲಿ???
ಕರಗುತ್ತಿರುವ ಕಾಡಿಸುವ ಕನವರಿಸುವ ಕನಸುಗಳ
ಒಂದೊಂದು ಘಟನೆಗಳಾರಂಭ
ಒಂದಷ್ಟು ಮುಗಿಯದ
ಒಂದೊಂದು ಮುಗಿದ ಬದುಕಿನ ಕಥನ
ಒಂದೊಂದು ಕ್ಷಣಗಳಲೂ ಮನಸ್ಸಿನಾಳೆಯ
ಓದಿಸಿಕೊಂಡೊಯ್ಯುತ ಮಿಡಿಯುವ ಪದಗಳಾಗಿವೆ.
ತೀರದ ಪುಟಗಳಿನ್ನೂ ಖಾಲಿಯಿವೆ...
ತೀಡುವ ಲೇಖನಿಗಳಲ್ಲಿನ್ನೂ ಶಾಹಿಯಿದೆ....
ಹೃದಯಲ್ಲಿದ್ದು ಮನದಾಳದ ಪುಸ್ತಕವನ್ನೋದುವ
ಹೊನಲಿನ ಬದುಕಿನ ದೋಣಿಯಲಿ ಪಯಣಿಸುವ
ಜೀವವೊಂದು ಬೇಕಾಗಿದೆ!
ಜನ್ಮಾಂತರಗಳೊಂದಿಗೆ ಜೊತೆಗಿದ್ದು
ಸಹನೆಯಿಂದಾಲಿಸುತ ನೂರಾರು ಕಥೆಗಳಿಗೆ
ಸ್ಪಂದಿಸುವ ಸಂಗಾತಿಯ ಮಧುರತೆ ಅಗತ್ಯವಿದೆ!!!!






No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...