Sunday, May 19, 2024

ಮನೆಯಂತರಾಳದಲಿ..



ಮನೆಯೆಂಬುದು
ಮನದೊಳಗಿನ ಭಾವನೆಗಳನು
ಮತ್ಸರವಿಲ್ಲದೆ ಪಾಲಿಸಲು ಅವಕಾಶವಿರುವ
ಮಧುರ ಬಾಂಧವ್ಯಗಳ ಸಮ್ಮಿಲನದಲಿ ನಲಿಯುವ
ಮೌಲ್ಯಯುತ ದೇವಸ್ಥಾನ ಎಂಬುದ್ದನ್ನು ಮರೆತು...
ಒಂದೆಡೆ ಮೂಲೆಯಲ್ಲೆಲ್ಲೋ
ಒಂದಿಷ್ಟು ಅಲಂಕಾರಗಳೊಂದಿಗೆ
ದೇವರುಗಳನ್ನು ಜೋಡಿಸಿಟ್ಟು ಕೈಮುಗಿಯುತ್ತೇವೆ!
ಮನೆಯ ನಿಜವಾದ ಪಾವಿತ್ರ್ಯತೆಯನ್ನರಿತಾಗ
ಸಂಸಾರ.... ಸಮಾಜ.... ಸಂವತ್ಸರಗಳಲ್ಲಿ
ಧನ್ಯತೆ ಪಡೆದು ಮಾನವೀಯ ಸತ್ಯ
ದರುಶನಕೆ ನಮ್ಮ ಈ ಬದುಕು ಸಾಕ್ಷಿಯಾಗಬಲ್ಲದು!!!!


No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...