Tuesday, May 7, 2024

ನಾನೆಂಬ ನಿಸ್ವಾರ್ಥ












ಸಾರ್ಥಕತೆಗೆ ಸಾಕ್ಷಿ ನಾನೇ...                             
ನಿರರ್ಥತೆಗೆ  ನಿರೂಪಣೆ ನಾನೇ...
ಚಂದದ ಅನುಭವದ ಆಲಿಂಗನ ನಾನೇ...
ಕರಗುವ ಕರಗಿಸೊ ಕರತಡಗಳು ನಾನೇ...
ಸತ್ಯ ಅಸತ್ಯಗಳ‌ ಸೂಕ್ಷತೆಗಳೂ ನಾನೇ...
ಅಳಿವು ಉಳಿವುಗಳ ಸಾಧಕನೂ ನಾನೇ..
ಬಾಹ್ಯ, ಅಂತರಂಗಗಳ ಮಿಡಿತಗಳೂ ನಾನೇ...
ನಾನಿದ್ದರೇನೇ ನನ್ನೀ ಲೋಕ..
ನಾನಿದ್ದರೇನೇ ನನ್ನೀ ಸೋಲು ಗೆಲುವು..
ನಾನಿದ್ದರೇನೆ  ನನ್ನೀ  ಕತ್ತಲು ಬೆಳಕು..
ಅರ್ಥವಾಗಲಿಲ್ಲವೇ??
ನೀವಿಲ್ಲದ ಜಗತ್ತನ್ನೂ ನೀವು ಊಹಿಸಬಲ್ಲಿರ!!??                ನಾನು ಸಾಧಿಸಬಲ್ಲೆ  ಎಂಬ ನಾನು ಎಂಬ ವ್ಯಕ್ತಿಯ              ಸಾಧನೆ, ಭೋದನೆ, ಸಂಶೋಧನೆ, ಆವಿಷ್ಕಾರ, ಸಂಸ್ಕರಣಗಳೇ ಸಾಮಾಜಿಕ ಬದಲಾವಣೆಯ ನಾಮದೇಯದ ಪ್ರತೀಕ! 
ಮೇಣ ಅಂದರೆ ಮರಣ!!               
ಉರಿದುರಿದು ಜಗಕೆ ಜ್ಯೋತಿಯನ್ನೀಡಿ ಕತ್ತಲಲಿ ಮರೆಯಾಗುವ ಉಳಿಯಲಾರದ್ದು!!!
ಉರಿಯುತ್ತಿದದ್ದು ಯಾರೂ ಎಂದು ಪ್ರಶ್ನಿಸದ ಜಗತ್ತಿದು.
ಉರಿಯಬೇಡ ಅರಿವಿಲ್ಲದ ಅರವಳಿಕೆಯಲಿ !
ಹುರಿಯಾಗಿರು.....                                                          ಹೃನ್ಮನಗಳ ಬೆಸೆಯಲು ನೀನೇನೀನಾಗಿ!                            ನನ್ನನುಭವಗಳ ನಿಸ್ವಾರ್ಥತೆಯ ಪದಗಳಿವು!! 


No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...