Sunday, May 5, 2024

ಪಯಣ....ಪ್ರಶ್ನಾರ್ಥಕ!

 



ಎಲ್ಲಿಗೆ ಈ ಬದುಕಿನ ಪಯಣ!!!??
ಎತ್ತ ಕಡೆ ಸಾಗುತ್ತಿದೆ ನಮ್ಮ ದಾರಿ!!?
ತಿಳಿದಿದ್ದರೆ
ತಿಳಿಸಿ...
ಏನೋ ಕೇಳುತ್ತೇವೆ...
ಏನನ್ನೋ ಹೇಳುತ್ತಿರುತ್ತೇವೆ...
ಎಲ್ಲವೂ ನಮ್ಮ ಅನುಭವದ್ದಲ್ಲ...!
ಏನನ್ನರಿತ್ತಿರದ ಮತ್ತೊಬ್ಬರದ್ದನ್ನು ನೋಡಿ, ಕೇಳಿ?!
ನಮ್ಮತನವೆಲ್ಲಿದೆ!!?
ನಮ್ಮಿಂದೇನಾಗುತ್ತಿದೆ??
ನಮಗೇಯರಿವಿಲ್ಲದೆ ನಾವಿದ್ದೇವೆ...
ಏಳುತ್ತೇವೆ.... ದುಡಿಯುತ್ತೇವೆ..!?.... ಮಲಗುತ್ತೇವೆ...

ದಿನಗಳು ಓಡುತ್ತಿರಲು..
ಚೈತನ್ಯ ಕುಂದುತ್ತಿರಲೂ..
ವರ್ಷಕ್ಕೊಂದು ದಿನ ಊದುತ್ತೇವೆ...
ಹುಟ್ಟಿದ ದಿನ ಇದೆಂದು!!!
ಪಯಣ ಪ್ರಶ್ವಾರ್ಥಕ!!!







: ಕವನ್ರಾಗ್

No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...