Thursday, May 2, 2024

ರಾಜಕೀಯ ಮಹತ್ವ

'ರಾಜಕೀಯ


ರಾಜರ ಸ್ಥಾನದಲ್ಲಿ
ನಸಾಮಾನ್ಯರು
ಕೀರ್ತಿವಂತರಾಗಿ
ಶಸ್ಸಿನೆಡೆಗೆ


ರಾಷ್ಟ್ರ, ರಾಜ್ಯ, ಜಿಲ್ಲಾ, ಗ್ರಾಮ, ಕ್ಷೇತ್ರ, ಸಮಾಜವನ್ನು
ಪ್ರಗತಿಯತ್ತ ಕೊಂಡ್ಯೊಯ್ಯುವ 
ಪ್ರಾಮಾಣಿಕ ಸೇವಾ ಮಾನುಷ ಗುಣಗಳ 
ಪರಿಶುದ್ಧವಾದ ನಾಯಕರುಗಳನ್ನು
ಪರಿಪೂರ್ಣವಾಗಿ ಹೊಂದಿಸಿಕೊಂಡ 
ಪ್ರಗತಿಪರ ಮೇರುಸ್ಥಾನ!
ಸ್ವಾರ್ಥ : ಮೋಹ : ಹಣ ಅಧಿಕಾರಗಳನ್ನು ಹಿಮ್ಮೆಟ್ಟಿಸಿ
ಜನ್ಮತಾಳಿದ ಗರ್ಭದ ಸತ್ಯಕ್ಕೆ ಸಾಕ್ಷಿಯನು
ಪ್ರತ್ಯಕ್ಷಗೊಳಿಸುವ ಮಹಾಭಾಗ್ಯಶಾಲಿಯಾದ 
ಪಂಚೇಂದ್ರಿಯ ತಹಬದಿಗಿಡುವ ನಿಜವಾದ ಗತ್ತು. 
ಕೆಳಮಟ್ಟನೆನಿಸಿಕೊಳ್ಳುವ ಒಬ್ಬ ಸಾಮಾನ್ಯ
ಕನಿಷ್ಠ ವ್ಯಕ್ತಿಯೆದುರು ಕೈಚಾಚಿ ನಮಸ್ಕರಿಸಿ
'ಮತ' ಎಂಬ ಮೆಟ್ಟಿಲ ಮೇಲೇರಿ ಜಯಗಳಿಸಿ
ಮೌಲ್ಯಯುತ ಆಡಳಿತ ನಡೆಸುವ 
ಮಹತ್ವವಾದ ‌ಮೇರು ಸ್ಥಾನ!
ಲಕ್ಷಾಂತರ ನಂಬಿಕೆಗಳಿಗೆ ದ್ರೋಹವೆಸಗಿದರೆ ಮುಂದಿನ ವಂಶದ ಶಾಪಕ್ಕೆ ಗುರಿಯಾಗುವ ಅನುಭವಗಳಿಗೆ ಸಾಕ್ಷಿಯಾಗಿದೆ ಈ ಜಗತ್ತು!!!
ಅರ್ಥೈಸಿಕೊಂಡರೆ ಅರಿವು ; 
ಅಪಚಾರವೆಸಗಿದರೆ ಅವನತಿ. 

: ಕವನ್ರಾಗ್, ಮೈಸೂರು

No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...