Wednesday, May 1, 2024

ಮಾತ್ರಿಕೆಯ ಗರ್ಭ

ತಾಯಗರ್ಭ

ಸಾಟಿಯಿಲ್ಲಸ ಆಗರ್ಭ ಶ್ರೀಮಂತಿಕೆಯ
ಭವ್ಯ ದೇಗುಲ!
ಸರ್ವಕೋಟಿ ದೇವರುಗಳು ನೆಲೆಸ ಬಯಸುವ
ಧನ್ಯತೆಯ ಗುಡಿ!
ಸಂಪೂರ್ಣತೆ ಮಮತೆಯಾಲಿಂಗನದ
ಸುಂದರ ದೇವಾಲಯ!
ಸಹನೆಯ ಉತ್ತುಂಗದಲಿ ರಾರಾಜಿಪ
ಆಂತರ್ಯ ನೆಲೆ!
ಸ್ವಲ್ಪವೂ ಕೊರತೆಯನ್ನಿರಿಸದ ಸಂತೃಪ್ತಿ
ಭವ್ಯ ಸೂರು!
ಸಕಲ ನೆಮ್ಮದಿಯಲಿ ಸದಾ ನಗುವನ್ನಿರಿಸುವ
ದಿವ್ಯ ಸಾನಿಧ್ಯ!
ಸೋಲು ಕೊರತೆ ವೇದನೆಗಳಿಲ್ಲದ ಚಂದದ
ಪುಟ್ಟ ಮನೆ!
ಬೆಚ್ಚನೆಗೂ ಚಳಿಗೂ ಮಾಧುರ್ಯದ
ಬೆಳಕಿನ ಅರಮನೆ!
ಮಾತೃ ಗರ್ಭದೊಳಗಿನ ಆ ನವ ಮಾಸಗಳು
ಮೈಮನಾಂತರ್ಯಗಳ ದೈವತ್ವದ
ಸ್ವರ್ಗೀಯ ಸನ್ನಿಧಿ!!!


: ಕವನ್ರಾಗ್, ಮೈಸೂರು


No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...