Saturday, April 27, 2024

ನಿರ್ಗವಿಯ ನಿಲುಮೆ


ನಾಟ್ಯವಾಡುವ ನವಿಲಾಗಿ

ಹಾಡುವ ಕೋಗಿಲೆಯಾಗಿ

ಹಂಸ ನಡುಗೆಯ ಕನ್ಯೆಯಾಗಿ

ಹೊಳೆಯುವ ನಗು ಮಿಂಚಾಗಿ

ಹರಿವ ಪ್ರಶಾಂತ ಹೊನಲಾಗಿ

ಚಂದದ ಶೃಂಗಾರದ ಹೂದೋಟವಾಗಿ..

ಪುಟಿಯುವ ಮುದ್ದು ಮಗುವಾಗಿ..

ಜವಬ್ದಾರಿಯ ಸ್ಪಷ್ಪತೆಯ ನಿಲುವಾಗಿ...

ವೈವಿಧ್ಯಮಯ ಉಡುಗೆಯೊಳು ಆಕರ್ಷಕ ಧರೆಯಾಗಿ..

ಸರಳತೆಯ ಮುಗ್ದ ಸ್ನೇಹಿತೆಯಾಗಿ...

ಮಗಳಿಗೆ ಮಮತೆಯ ತಾಯಾಗಿ...

ನಯನಗಳಿಗೆ ತಂಪೆರೆವ ಸುಂದರ ಚೆಲುವೆಯಾಗಿ...... 

ಈ ಕವಿಯ ಮೌನವನ್ನೂ‌ ಮುರಿದು 

ಪದಗಳಲಿ ಅರಳುವ ಸುಮವಾಗಿ...

ನನ್ನೊಳಗೆ ಹರುಷದ ತರಂಗಗಳನು 

ನವಿರಾಗಿ ಮೀಟಿದ ಭಾವಾಂತರಂಗದ 

ಭಾ.. ನಿರ್ಗವಿಗೆ ಧನ್ಯೋಸ್ಮಿ✒️☺️

No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...